ಒಡೆದ ಹೃದಯದ ತಾಣದಲಿ
ಆಗಿದೆ ಕಲ್ಲಿನ ಸ್ಥಾಪನೆ
ಘಾಸಿಗೊಂಡ ಮನಕಾಗಲು
ಕಾಲದ ಸಾಂತ್ವನದ ಲೇಪನೆ…
ಇನ್ನೇನು ಚಿಂದಿಯಾಗಲಿರುವ
ಸವೆದ ಚಿತ್ರದೊಳು ಮಾಸಿದ
ಬಣ್ಣಗಳ ನಡುವೆ ಇಂದು ಕಾಣದ
ಮೊಗ ಹೇಗಿತ್ತೋ ನೆನಪಿಲ್ಲ…
ಗಾಯ ಹೋಗಲು ವಾಸಿಯಾಗಿ
ಬಿಟ್ಟು ಹೋಯಿತು ಕಲೆಯೊಂದ,
ಹೊತ್ತು ಉರಿದ ಮನ ವನವು ಈಗ
ಕೆಂಡವಾರಿದ ಬೂದಿ ಬಯಲು…
ಪ್ರಕವಿ(Prakavi)
©2009 Pradeep Hegde. All rights reserved.
NICE…. idu masth ide guruve.
LikeLike
ಧನ್ಯವಾದ ಗುರುಗಳೇ… 🙂
LikeLike
ಪ್ರದೀಪ್,
ಕವನ ಚೆನ್ನಾಗಿದೆ…
“ಅಒಡೆದ ಹೃದಯದ ತಾಣದಲಿ
ಆಗಿದೆ ಕಲ್ಲಿನ ಸ್ಥಾಪನೆ ” ಸಾಲುಗಳು ಇಷ್ಟವಾದವು..
LikeLike
ಧನ್ಯವಾದ ಶಿವು ಅವರೇ.. ಕವನಕ್ಕೆ ಹೋಲುವ ಚಿತ್ರವಿದೆಯೇ ನಿಮ್ಮ ಬಳಿ..?
LikeLike
ಮೊಗ ಹೇಗಿತ್ತೋ ನೆನಪಿಲ್ಲ…
ಬರೀ ನೋವ ನೆನಪಿದೆಯಲ್ಲ ಅಷ್ಟೆ ಸಾಕು ಈ ಬದುಕಿಗೆ
-ಮೌನಿ
LikeLike
ಮೌನಿಯವರೇ, ಮಾತನಾಡಿದ್ದಕ್ಕೆ ಧನ್ಯವಾದಗಳು! ನೋವಿಲ್ಲದಿದ್ದರೆ ನಲಿವಿಗೆ ಮಹತ್ವವಿರದು. ಅಲ್ವೇ…. ಬದುಕೆಂದರೆ ನೋವು, ನಲಿವು ಎಲ್ಲಾ ಇರುತ್ತೆ 😉
LikeLike
boodi bayalu siktenappo?????
LikeLike
ಬೂದಿ ಬಯಲು ಹಂಗೇ ಇದೆ.. ಏನು ಬ್ಲಾಗಿಗೆ ಒಂದು ತಿಂಗಳು ರಜೆ ಕೊಟ್ಬಿಟ್ಟಿದ್ದೀ??
LikeLike