ಬದುಕಿನ ಹಾದಿಯ ಬವಣೆಯ ತಿರುವಿನಲಿ
ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ
ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು
ಕತ್ತಲಾದರೇನು.. ಆಗಿಲ್ಲ ಮುಂಜಾನೆಯಿನ್ನೂ…
ಬಾಡಿ ಹೋದ ನಿನ್ನ ನೆನಪಿನ ಹೂಗಳನು
ಮರೆವೆಂಬ ಮೂಟೆಗೆ ತುರುಕಿ,
ಭೋರ್ಗರೆವ ಕಾಲದ ನದಿಯ ತಳಕ್ಕೆಸೆದು
ಮುಂದುವರೆಸಿರುವೆ ಪಯಣವ, ಒಂಟಿ ಕಾಳರಾತ್ರಿಯಲಿ
ಮುಂಜಾನೆಯ ಕಿರಣಗಳನರಸುತ್ತಾ…
ಹರಿವ ಕಾಲದ ನದಿಯ ಶುಭ್ರ ಜಲವನ್ನು
ಎರಚಿ ಮನದ ಮೂತಿಗೆ, ತೊಳೆದು ನಿನ್ನೆಯ ಕೊಳೆಯ,
ಮಾಡಿ ಇಂದಿನ ಜಳಕವ, ಸಜ್ಜಾಗಿ ಮುಂದಕ್ಕೆ
ನಿಂತಿರುವೆ ಹೊರಟು, ಬಾಳ ಹಾದಿಯಲಿ
ಮುಂಜಾನೆಯ ಕಿರಣಗಳ ಸ್ವಾಗತಿಸಿ…
ಪ್ರಕವಿ(Prakavi)
©2008 Pradeep Hegde. All rights reserved.
ಇದು ಬದುಕ ಪಯಣ!
LikeLike
nice one sirr…. madhyada saalugalu ishta aaytu
heege bareetiri….
LikeLike
ಪ್ರಕವಿಗಳೇ,
ಚಿತ್ರ ಮಾತನ್ನು ನಾನು ಒಪ್ಪುತ್ತೇನೆ…..
LikeLike
ಚಿತ್ರಾ, ಶಿವು ಅವರೇ! ಧನ್ಯವಾದಗಳು. ಸರಿಯಾಗಿ ಹೇಳಿದ್ದೀರಿ… ಇದು ಬದುಕಿನ ಪಯಣ. ಹಾಗೆಯೇ ಹೆಸರಿಡೋಣವೆಂದು ಯೋಚಿಸಿದ್ದೆ, ಆದರೆ ಕೊನೆ ಗಳಿಗೆಯಲ್ಲಿ ಈಗಿದ್ದ ಹೆಸರ ನೀಡಿ ಪ್ರಕಾಶಿಸಿದೆ.
ಕಲ್ಲರೆ ಅವರೇ, ನಿಮಗಿಷ್ಟವಾದುದು ಸಂತೋಷವಾಯಿತು… 🙂
LikeLike
ಎಷ್ಟೊಂದು ಚೆನ್ನಾಗಿ ಬರಿತೀರ
LikeLike
ಸಂತೋಷ್ ಅವರೇ, ನೀವು ಬಂದದ್ದು ಸಂತೋಷವಾಯಿತು… 🙂
LikeLike
ಪ್ರಕವಿ….
ಇದು ಜೀವನದ..”ಭರವಸೆ”……..
LikeLike
ಹೌದು ಪ್ರಕಾಶರೇ… ಜೀವನದಲ್ಲಿ ಯಾವತ್ತೂ ಭರವಸೆ ಕಳೆದುಕೊಳ್ಳಬಾರದು… 😀
LikeLike
Congrats..ur blog published in kannadaprabha website…
LikeLike
ಧನ್ಯವಾದಗಳು… 🙂
LikeLike
ಸೂಪರ್, ನಾಳೆಗೆ ಶುಭವಾಗಲಿ.. 😉
LikeLike
ಬದುಕಿನ ಪಯಣದ ಒಂದು ಸುಂದರ ಕವನ…
ಗಣೇಶ್.ಕೆ.
LikeLike
ಪ್ರಮೋದ್, ಗಣೇಶ್ ಅವರೇ, ಧನ್ಯವಾದಗಳು… ಬರ್ತಾ ಇರಿ… ಹಾಗೇ, ನೀವೆಲ್ಲರೂ! 🙂
LikeLike
nanege e kavana bareda hagide, thumba chennagide sir
LikeLike
ಧನ್ಯವಾದಗಳು, ಬೃಂದಾ ಅವರೇ.. 🙂
LikeLike